Wednesday, April 29, 2015

ಮಾನಸಯಾನ...

ಕಲ್ಪನಾ ಕನ್ನಡಿಯಲಿ
ಸತ್ಯದ ಬಿಂಬವೋ...
ಸುಳ್ಳಿನ ಮಡಿಲಲ್ಲೇ
ರೋಗಗಳ ತೀವ್ರ ಶೋಧವೋ..
ಯಾವುದೋ ಘಟನೆ..ಜೀವನವೆಲ್ಲಾ ತಪನೆ
ದೈವ-ಭೂತ ಮಂತ್ರ-ತಂತ್ರಗಳ ಸುಳಿಯೊಳಗೆ
ಹುಚ್ಚಾಸ್ಪತ್ರೆಯಲ್ಲಿರದ ವಿಚಿತ್ರ ಹುಚ್ಚು
ಹೊಲಸು ಬಾಯಿಗಳಲ್ಲಿ...
ವಿಷಯಗಳು ತಿರುಗಿ
ಮನಸುಗಳು ಮರುಗಿ
ಸಾವಿರ ಭ್ರೂಣದಂಥ ಕನಸುಗಳ ತದ್ದಿನ:(

ಈಗ ಮನಸ್ಸು ಹೇಗಿದೆ? 
ಎಂಬುದೊಂದೇ ಇಲ್ಲಿ ಪರಮಪ್ರಶ್ನೆ
ಆ ಮನೋಮಯ ಲೋಕದ ಯಾನದಲಿ
ಮೆದುಳಿನ ಮೂರ್ತ ನೆರಳಲ್ಲೇ,
ಅಮೂರ್ತ ಭಾವಗಳ ಒಡನಾಟ
ಐಂದ್ರಜಾಲಿಕ ಡೋಪಮಿನ್ ಸೆರೋಟೊನಿನ್ ಕಣ್ಣಾಮಚ್ಚಾಲೆಯಲಿ
ಅಡಗಿದ್ದ ನಮ್ಮೊಳಗಿನ ಪರಮಾತ್ಮ..
ಒಂಟಿ ಭಾವವೂ ತುಷಾರದಷ್ಟು ಸೂಕ್ಷ್ಮ
ಮನೋರೋಗದ ಅಂತ್ಯಕ್ಕೆ ಕೇಳಿಸದಿರಲಿ ವಿಕಟನುಡಿಗಳ ಅನುರಣನ...
ಪ್ರೀತಿ ಒಂದೇ ಸಾಕು
ಬದುಕ ಬಯಸಲು ಕಾರಣ...!

No comments:

Post a Comment