Thursday, April 30, 2015

COP ಕೈವಾರ..:)


ಹೊಸ ವರುಷದಿ ಹೊಸ ಹರುಷವ ತರಲು ನಾವೆಲ್ಲರೂ ಕೈವಾರಕ್ಕೆ ಹೊರಡಲು..
ಹೋಗಿ ಬರುವೆವೆಂದು ಗಂಟು ಮೂಟೆ ಕಟ್ಟಿಕೊಂಡು ಹೊರಟೆವು
ಸಂತಸದಿ ಶ್ರೀ ಕ್ಷೇತ್ರ ಕೈವಾರವ ತಲುಪಿ,
ಮನಸೋತೆವು ಯೋಗಿನಾರಾಯಣ ಆಶ್ರಮದ ಪ್ರಶಾಂತತೆ ಕಂಡು
ಊರ ಮುಖಂಡರು ಜೊತೆ ಮಾತುಕಥೆಗಳು,,ರುಚಿರುಚಿಯಾದ ಊಟ ತಿಂಡಿಗಳು
ನಾಳೆಗೆ briefingಗಳು ..ಇವತ್ತಿನ debriefingಗಳು
ಎಲ್ರಿಗೂ ಕೊಟ್ರು IDcardಗಳು..ಎಲ್ರಿಗೂ social mapping ಬಗ್ಗೆ classuಗಳು!

ಮರುದಿನ ಹೊರಟೆವು ನಮ್ಮ ಹಳ್ಳಿಗೆ..ಏಳು ಹಳ್ಳಿಗಳಲ್ಲಿ ದೊಡ್ಡದಾದ ಹುಲುಗುಮ್ಮನಹಳ್ಳಿಗೆ !
300 ಮನೆಗಳು..1400 ಜನಗಳು..3 ಬೋರ್ವೆಲ್ಲುಗಳು..2 ನೀರಿನ tankಗಳು
ದಿನಕ್ಕೆ 6 ಗಂಟೆಗಳು ಮಾತ್ರ ಕೊಡ್ತಾರಂತೆ ಕರೆಂಟು ..
ಆದರು election ಟೈಮ್ ಅಲ್ಲಿ ಮೊದ್ಲು ಕೇಳಕ್ ಬರ್ತಾರೆ ವೋಟು!!!
ಬೆಳೀತಾರೆ ತರಕಾರಿಗಳು ..ಇಲ್ಲಿ ಹೈನುಗಾರಿಕೆಗೆ ಸಿಗುತ್ತೆ ಒಳ್ಳೆ ರೇಟು..
ಮುಖ್ಯ ಬೆಳೆಗಳು-ರಾಗಿ ಜೋಳ ಸಾಸಿವೆ ಎಳ್ಳು ಅಳಸಂದೆ...
ಬೆಳಿಗ್ಗೆ ಮಧ್ಯಾಹ್ನ ರಾತ್ರಿ – ಮೂರು ಹೊತ್ತೂ ರಾಗಿ ಮುದ್ದೆ
ರೇಷಿಮೆಯೇ ಇಲ್ಲಿನ ಹಿರಿಮೆ..9 ಮಹಿಳಾ ಸಂಘಗಳುಂಟು ಇನ್ನೇನು ಕಡಿಮೆ !
ಉಂಟು ಒಂದು ಊರಿನ ಚಾವಡಿ ..ಶಾಲೆಯ ಮಡಿಲಲ್ಲೇ ಅಂಗನವಾಡಿ !

ಹಳ್ಳಿಗೆಲ್ಲಾ ಹಂಚುದ್ವಿ Health campನ ಚೀಟಿಗಳು ..
ಹಿರಿಯರು ಮಕ್ಕಳು ಸ್ಕೂಲ್ ಗೆ ಬಂದು social mapಗಾಗಿ ಬಿಡಿಸಿದರು ಹಳ್ಳಿಯ ಚಿತ್ರಗಳು !
ತಪಾಸಣ ಶಿಬಿರಕ್ಕೆ ಹೊರುಟ್ವಿ ಸಂಜೆ ಹೇಮಂತ್ ಸರ್ ಜೊತೆ  
ಹಳ್ಳಿ ಮನೆಗಳ್ಗೆ ಹೋಗಿ ಹೇಳಿ ಬಂದ್ವಿ ಮತ್ತೆ ಮತ್ತೆ
ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಂದಿಯೆಲ್ಲ ಬಂದ್ರು ಡಾಕ್ಟ್ರು ನೋಡಕ್ಕೆ
ಮಾತ್ರೆಗಳು ಔಷಧಿಗಳು ತೊಗೊಂಡ್ ಬಂದಿದ್ವಿ ಅವ್ರಿಗ್ ಕೊಡಕ್ಕೆ

ಮೂರನೇ ದಿನ ಹಳ್ಳಿಗೆ ಹೊರುಟ್ವಿ Family studyಗೆ ..5ಗುಂಪುಗಳ್ ಮಾಡಿ ಒಂದೊಂದ್ ಗುಂಪು ಎರಡು ಮನೆಗೆ
ಗಾಳಿ.. ನೀರು.. ಬೆಳಕು ಸರಿಯಾಗಿದ್ಯ ನೋಡುದ್ವಿ.,ಸಮಸ್ಯೆಗಳು ತಿಳ್ಕೊಂಡ್ವಿ...
ಪ್ರಾಥಮಿಕ ಆರೋಗ್ಯ ಕೇಂದ್ರ ನೋಡಕ್ಕೆ ಕೈವಾರಕ್ಕೆ ಬಂದ್ವಿ..
ಊಟ ಆದ್ಮೇಲೆ ಹೋದ್ವಿ Deflouridation plant ನೋಡಕ್ಕೆ..
ಅರ್ಜುನ್ ಸರ್ ಹೇಳ್ಕೊಟ್ರು ಏನು ಯಾಕೆ ಎತ್ತ ಈ plant ಬಗ್ಗೆ
ಉಪ್ಪು ನೀರು ಒಳಗೋಗಿ ಸಿಹಿನೀರು ಆಚೆ ಬರತ್ತೆ..
ಅದಕ್ಕೆ ಅರ್ಜುನ್ ಸರ್ ಗೆ Hatsoff ಹೇಳ್ಬೇಕು ನಾವು ಮತ್ತೆ ಮತ್ತೆ

ನಾಲ್ಕನೇ ದಿನ ಹಳ್ಳಿ ಶಾಲೆಗ್ ಬಂದ್ವಿ Health checkup ಮಾಡಕ್ಕೆ..
ಮೊದ್ಲು ಒಬ್ರು ಹೆಸರು ವಯಸ್ಸು ಕೇಳಕ್ಕೆ..ಆಮೇಲೆ ಒಬ್ರು heightu weightu ನೋಡಕ್ಕೆ..
ಮಕ್ಕಳೆಲ್ಲಾ ಸಾಲಾಗಿ ಬಂದು ಕಣ್ಣು ಪರೀಕ್ಷೆ ಮಾಡಿಸಿ...ಹಲ್ಲುಗಳು ಪರೀಕ್ಷೆ ನು ಮುಗೀತು
ಮಕ್ಕಳು ಮಾಡಿದ್ರು ಪಂಚಭಾಷಾವಂದನೆ..ನಾವೂ ಮಾಡುದ್ವಿ ಅನುಕರಣೆ !
ಐದನೇ ದಿನ ಅಂಗನವಾಡಿಗೆ ಕರ್ಕೊಂಡು ಹೋದ್ರು
ಎಲ್ಲಾ ಮನೆಗಳ್ಗು ಹಾಕೊಂಡ್ ಬಂದ್ವಿ ನಂಬರ್ರು..
ಊರು ಕೇರಿ ಸುತ್ತಿದ್ ಅನುಭವ ಸೂಪರ್ರು!

ಆರನೇ ದಿನ ಬಂತು Community Education Programmeu...
ಕಥೆಗಳು, scriptಗಳು, ಡೈಲಾಗುಗಳು, ಹಾಡುಗಳು, danceಗಳು..
ತಲುಪಿದೆವು ಹಳ್ಳಿಗೆ ..ಆಮಂತ್ರಣ ಕೊಟ್ಟೆವು ಎಲ್ಲರಿಗೆ...
ಕಾರ್ಯಕ್ರಮ ಶುರು ಮಾಡುದ್ವಿ ಪ್ರಾರ್ಥನೆ ಮಾಡಿ..
ನಾವ್ ಮಾಡಿದ್ 5 ನಾಟಕಗಳು ..ಶಿಳ್ಳೆಗಳು ಕೂಗಾಟಗಳು ..ಕೊನೆಗೂ ದಕ್ಕಿದ ಚಪ್ಪಾಳೆಗಳು!!
ನಾವ್ ಆದ್ವಿ ಹುಲುಗುಮ್ಮನಹಳ್ಳಿ ಹುಲಿಗಳು

ಬಂದೇ ಬಿಡ್ತು ಶ್ರಮದಾನದ ದಿನ..ಭರ್ಜರಿ ತಯ್ಯಾರಿ ನಡೆಸಿದ್ವಿ ಹಿಂದಿನ ದಿನ..
Anti Tobacco Rally ನಡೆಸಿದ್ವಿ ಊರು ತುಂಬಾ..chartಗಳು sloganಗಳು...ತುಂಬಾ ತುಂಬಾ
ಗಂಟೆಗೊಂದು ಸಿಗರೇಟು,ನರಕಕ್ಕೆ ಟಿಕೆಟು !!!
Water tank ಕ್ಲೀನ್ ಮಾಡುದ್ವಿ ಎಲ್ರೂ ಕಷ್ಟಪಟ್ಟು..ಎಲ್ಲಾರ್ಗೂ ಅರ್ಥ ಆಯ್ತು ಒಗ್ಗಟ್ಟಿನಲ್ಲಿ ಬಲವುಂಟು!
Forms ತೊಗೊಂಡು ಹೊರುತ್ವಿ Survey ಮಾಡಕ್ಕೆ ..ಕೆಲಸ ಮುಗ್ಸೊದ್ರಲ್ಲಿ ಸುಸ್ತಾಯ್ತು ಸಿಕ್ಕಾಪಟ್ಟೆ !!

ಹುಲುಗುಮ್ಮನಹಳ್ಳಿ ಹುಲಿಗಳು ..ಗುಟ್ಟಹಳ್ಳಿ ಗಂಡುಗಲಿಗಳು
ಭೂರಗಮಾಕಳಹಳ್ಳಿ ಭೂಪರು..ಕೆಂಪದೇನಹಳ್ಳಿ ಕುವರರು
ದೊಡ್ಡಾಟ ಆಡಲು ಬಂದ ದೊಡ್ಡಕೊಂಡರಹಳ್ಳಿಯವರು
ದೊಡ್ಡ ದೊಡ್ಡ ಕನಸು ಕಟ್ಟಿದ ಚಿಕ್ಕಕೊಂಡರಹಳ್ಳಿಯವರು
ಕೊನೆಗೆ ಬಂದ ಬಿ ವಡ್ಡರಹಳ್ಳಿಯವರು...
ಸ್ನೇಹಿತರೆಲ್ಲರ ಪರವಾಗಿ ಈ ಕಾರ್ಯಕ್ರಮದ ಮೂಲಕ, ಪುಸ್ತದಲ್ಲಿರದ ನೂರಾರು ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ತುಂಬಿ ನಮ್ಮ ಸಾಮಾಜಿಕ ಜವಾಬ್ದಾರಿಗೆ ನಾಂದಿ ಹಾಡಿದ ಎಲ್ಲಾ ಶಿಕ್ಷರಿಗೂ, ಪ್ರಾಂಶುಪಾಲರಿಗೂ ಹೃತ್ಪೂರ್ವಕ ಅಭಿನಂದನೆಗಳು!

No comments:

Post a Comment